Slide
Slide
Slide
previous arrow
next arrow

ಮುರುಡೇಶ್ವರದ ಸಮುದ್ರ ಪಾಲಾಗುತ್ತಿದ್ದ 3 ಮಂದಿಯ ರಕ್ಷಣೆ

300x250 AD

ಭಟ್ಕಳ: ಪ್ರಸಿದ್ಧ ಮುರ್ಡೇಶ್ವರದ ಸಮುದ್ರದಲ್ಲಿ ಈಜಲು ತೆರಳಿ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ಶುಕ್ರವಾರ ಲೈಫ್‌ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ಹಂಸನಬಾವಿ ಗ್ರಾಮದ ಸಿದ್ಧಾರ್ಥ (24), ದೀಕ್ಷಿತ್ (20) ಹಾಗೂ ಸಂತೋಷ (24) ಲೈಫ್‌ಗಾರ್ಡ್‌ಗಳಿಂದ ರಕ್ಷಣೆಗೊಳಗಾದ ಪ್ರವಾಸಿಗರು. ಹಾವೇರಿ ಜಿಲ್ಲೆಯಿಂದ ಆಗಮಿಸಿದ್ದ ಈ 5 ಮಂದಿ ಯುವಕರ ತಂಡ ಧರ್ಮಸ್ಥಳ ಪ್ರಯಾಣ ಮುಗಿಸಿ ಶುಕ್ರವಾರ ಮುರ್ಡೇಶ್ವರಕ್ಕೆ ಆಗಮಿಸಿದ್ದರು.

300x250 AD

ಮುರ್ಡೇಶ್ವರ ಸಮುದ್ರದಲ್ಲಿ ಈಜಲು ಇಳಿದ ಸಂದರ್ಭದಲ್ಲಿ ಅಲೆಗಳ ಆರ್ಭಟಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ಲೈಫ್‌ಗಾರ್ಡ್‌ ಸಿಬ್ಬಂದಿ ಚಂದ್ರಶೇಖರ ದೇವಾಡಿಗ, ಜಯರಾಮ ಹಾಗೂ ಪಾಂಡು ಇವರನ್ನು ರಕ್ಷಣೆ ಮಾಡಿ ತೀರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Share This
300x250 AD
300x250 AD
300x250 AD
Back to top